ಅಗ್ನಿಸಾಕ್ಷಿ (ಅನುವಾದ.. " ದಿ ಫೈರ್ ವಿಟ್ನೆಸ್ ") ಒಂದು ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಇದು 2013ರ ಡಿಸೆಂಬರ್ 2ರಂದು ಕಲರ್ಸ್ ಕನ್ನಡದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಿಂದ ಈ ಧಾರಾವಾಹಿಯು ಕರ್ನಾಟಕದ ಎಲ್ಲೆಡೆ ಪ್ರಸಿದ್ಧಿ ಹೊಂದಿತು. ಈ ಕಾರ್ಯಕ್ರಮವು 6 ವರ್ಷಗಳ ಕಾಲ ಪ್ರಸಾರವಾದ ನಂತರ 2020ರ ಜನವರಿಯಲ್ಲಿ ಕೊನೆಗೊಂಡಿತು. ನಗರ + ಗ್ರಾಮೀಣ ಪ್ರದೇಶದಲ್ಲಿ ಧಾರಾವಾಹಿಯ ಅತ್ಯಧಿಕ ಟಿಆರ್‌ಪಿ 23.5 (ಅಂಜಲಿ ಮದುವೆ ಮತ್ತು ಚಂದ್ರಿಕಾ ಸತ್ಯ ಬಹಿರಂಗ) ಅದೇ ವಾರದ ಅತ್ಯಧಿಕ ನಗರ ಟಿಆರ್‌ಪಿ 19.7, ಕಿಶೋರ್ ಸಾವಿನ ಸಂದರ್ಭದಲ್ಲಿ (ದುಷ್ಟ ಸಂಹಾರ) 21.3 ರೇಟಿಂಗ್‌ಗಳನ್ನು ಪಡೆದುಕೊಂಡಿತ್ತು. ವಿಶೇಷ ರೇಟಿಂಗ್‌ಗಳು ಅಂಜಲಿ ಮದುವೆಯ ದಿನದಂದು ಚಂದ್ರಿಕಾ ಸತ್ಯವನ್ನು ಬಹಿರಂಗಗೊಂಡದಿನ 24.3 ಮತ್ತು 25.4 ಆಗಿತ್ತು. == ಕಥಾವಸ್ತು == ಇತರರ ಅಗತ್ಯಗಳನ್ನು ತನ್ನಕ್ಕಿಂತ ಮುಂದಿಡುವ ದಯೆ ಮತ್ತು ಸೌಮ್ಯ ವ್ಯಕ್ತಿ ಸನ್ನಿಧಿ ಮತ್ತು ಸುಲಭ, ಮೋಜಿನ, ಪ್ರೀತಿಯ ಯುವ ಉದ್ಯಮಿ ಸಿದ್ಧಾರ್ಥ್. ಅವರ ಮದುವೆಯನ್ನು ಸಿದ್ಧಾರ್ಥನ ಹಿರಿಯ ಅತ್ತಿಗೆ ಚಂದ್ರಿಕಾ ಅವರು ಏರ್ಪಡಿಸಿರುತ್ತಾಳೆ. ಸನ್ನಿಧಿಗೆ ಮಕ್ಕಳಗಲ್ಲ ಎನ್ನುವ ಕಾರಣಕ್ಕೆ ಸನ್ನಿಧಿಯನ್ನು ಚಂದ್ರಿಕಾ ಆಯ್ಕೆ ಮಾಡುತ್ತಾಳೆ. ಸಮಯ ಮುಂದುವರೆದಂತೆ ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ ಮತ್ತು ಸಿದ್ಧಾರ್ಥನ ಕಿರಿಯ ಸಹೋದರ ಅಖಿಲ್ ಮತ್ತು ಸನ್ನಿಧಿಯ ಕಿರಿಯ ಸಹೋದರಿ ತನು ಕೂಡ ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸುತ್ತಾರೆ, ಮದುವೆಯಾಗಲು ಆಶಿಸುತ್ತಾರೆ. ಆದಾಗ್ಯೂ , ಸನ್ನಿಧಿ ಮತ್ತು ಸಿದ್ಧಾರ್ಥ್ ಅವರ ಮದುವೆಯ ಜೊತೆಗೆ ಅವರ ಕನಸುಗಳಿಗೆ ಚಂದ್ರಿಕಾ ನಿರಂತರವಾಗಿ ಬೆದರಿಕೆ ಹಾಕುತ್ತಾಳೆ , ಅಜ್ಞಾತ ಮತ್ತು ನಿಗೂಢ ಕಾರಣಗಳಿಂದಾಗಿ (ತನ್ನ ತಂದೆಯ ಮರಣದ ಸುತ್ತಲೂ) ವಾಸುದೇವ್ ಸಿದ್ಧಾರ್ಥ್ ಅವರ ತಂದೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಚಂದ್ರಿಕಾ ತನ್ನ ಪ್ರಿಯಕರನ ಸಹಾಯದಿಂದ ಸಿದ್ಧಾರ್ಥ್ ಅವರ ಕುಟುಂಬವನ್ನು ನಾಶಮಾಡಲು ಯೋಜಿಸುತ್ತಾಳೆ. ಚಂದ್ರಿಕಾಗೆ ರಾಧಿಕಾ ಎಂಬ ಹಿರಿಯ ಸಹೋದರಿ ಇದ್ದಾಳೆ , ಆಕೆ ವಾಸುದೇವನ ಹಿರಿಯ ಮಗನಾದ ಗೌತಮನ ನಿಜವಾದ ಪತ್ನಿ ಆಗಿರುತ್ತಾಳೆ. ಈ ದಂಪತಿಗೆ ಇಬ್ಬರು ಅವಳಿ ಪುತ್ರಿಯರಿದ್ದಾರೆ; ಕುಷಿ ಮತ್ತು ಆಯುಷಿ. ಚಂದ್ರಿಕಳ ಯೋಜನೆಗಳನ್ನು ವಿಫಲಗೊಳಿಸುವ ಮೂಲಕ ಸನ್ನಿಧಿ ತನ್ನ ಕುಟುಂಬವನ್ನು ರಕ್ಷಿಸಲು ತನ್ನ ಇಚ್ಛಾಶಕ್ತಿಯನ್ನು ಹೇಗೆ ಬಳಸುತ್ತಾಳೆ ಎಂಬುದರ ಸುತ್ತ ಕಥೆ ಸುತ್ತುತ್ತದೆ. == ಪಾತ್ರವರ್ಗ == === ಮೂಲ ಪಾತ್ರಗಳು === ವೈಷ್ಣವಿ ಗೌಡ : ಸನ್ನಿಧಿಯ ಪಾತ್ರದಲ್ಲಿ,- ಸುಮತಿಯ ಹಿರಿಯ ಮಗಳು ಪ್ರದೀಪ್ ಮತ್ತು ತನು ಅವರ ಸಹೋದರಿ. ಸಿದ್ಧಾರ್ಥ ಅವರ ಪತ್ನಿ. ವಿಜಯ್ ಸೂರ್ಯ: ಸಿದ್ಧಾರ್ಥನಾಗಿ, ವಾಸುದೇವ ಅವರ ಎರಡನೇ ಮಗ. ಗೌತಮ್ ಮತ್ತು ಅಂಜಲಿ ಅವರ ಸಹೋದರ, ಸನ್ನಿಧಿಯ ಪತಿ. ಪ್ರಿಯಾಂಕ ಎಸ್: ಚಂದ್ರಿಕಾಳ ಪಾತ್ರದಲ್ಲಿ, ರಾಧಿಕಾ ಮತ್ತು ಮಾಯಾಳ ಸೋದರಿ. ಕಿಶೋರ್ ಪ್ರೇಮಿ. ಗೌತಮ್ ಎರಡನೇ ಪತ್ನಿ. ರಾಜೇಶ್ವರಿ: ಪಾತ್ರದಾರಿ ಬದಲಾಗುವ ಮೊದಲು. === ಇತರೆ ಪಾತ್ರಗಳು === ಮುಖ್ಯಮಂತ್ರಿ ಚಂದ್ರು : ವಾಸುದೇವನಾಗಿ, ಗೌತಮ್, ಸಿದ್ಧಾರ್ಥ, ಅಖಿಲ ಮತ್ತು ಅಂಜಲಿ ಅವರ ತಂದೆ. ಆಯುಷಿ ಮತ್ತು ಖುಷಿಯ ಅಜ್ಜ. ಸುಕೃತ ನಾಗ್: ಅಂಜಲಿ ಪಾತ್ರದಲ್ಲಿ. ವಾಸುದೇವ ಅವರ ಮಗಳು. ಗೌತಮ್, ಸಿದ್ಧಾರ್ಥ್ ಮತ್ತು ಅಖಿಲ್ ಸಹೋದರಿ. ಶೌರ್ಯ ಅವರ ಪತ್ನಿ. ರಾಜೇಶ್ ಧ್ರುವ: ಅಖಿಲನಾಗಿ, ವಾಸುದೇವ ಅವರ ಮೂರನೇ ಮಗ ಗೌತಮ್, ಸಿದ್ಧಾರ್ಥ ಮತ್ತು ಅಂಜಲಿಯ ಸಹೋದರ. ತನು ಅವರ ಪತಿ. ಐಶ್ವರ್ಯಾ ಸಾಲೀಮತ್: ತನು ಪಾತ್ರದಲ್ಲಿ, ಸುಮತಿಯ ಕಿರಿಯ ಮಗಳು. ಪ್ರದೀಪ್ ಮತ್ತು ಸನ್ನಿಧಿಯ ಸಹೋದರಿ ಅಖಿಲ್ ಪತ್ನಿ. ಶೋಭಾ ಶೆಟ್ಟಿ: ಪಾತ್ರದಾರಿ ಬದಲಾಗುವ ಮೊದಲು. ಶಶಾಂಕ್ ಪುರುಷೋತ್ತಮ್: ಗೌತಮ್ ಪಾತ್ರದಲ್ಲಿ, ವಾಸುದೇವ ಅವರ ಹಿರಿಯ ಮಗ. ಸಿದ್ಧಾರ್ಥ್, ಅಖಿಲ್ ಮತ್ತು ಅಂಜಲಿ ಅವರ ಸಹೋದರ. ರಾಧಿಕಾ & ಚಂದ್ರಿಕಾಳ ಪತಿ. ಆಯುಷಿ ಮತ್ತು ಖುಷಿಯ ತಂದೆ. ಅನುಷಾ ರಾವ್: ರಾಧಿಕಾ ಪಾತ್ರದಲ್ಲಿ. ಚಂದ್ರಿಕಾ ಮತ್ತು ಮಾಯಾಳ ಸಹೋದರಿ. ಗೌತಮ್ ಪತ್ನಿ, ಆಯುಷಿ ಮತ್ತು ಖುಷಿಯ ತಾಯಿ. ಬೇಬಿ ಚಂದನಾ: ದ್ವಿಪಾತ್ರದಲ್ಲಿ ಆಯುಷಿ - ಗೌತಮ್ ಮತ್ತು ರಾಧಿಕಾ ಅವರ ಹಿರಿಯ ಮಗಳು ಮತ್ತು ಖುಷಿಯ ಅವಳಿ ಸಹೋದರಿ. ಖುಷಿ - ಗೌತಮ್ ಮತ್ತು ರಾಧಿಕಾ ಅವರ ಕಿರಿಯ ಮಗಳು. ಆಯುಷಿಯ ಅವಳಿ ಸಹೋದರಿ. ಇಶಿಥಾ ವರ್ಷಾ: ಮಾಯಾ ಪಾತ್ರದಲ್ಲಿ. ಚಂದ್ರಿಕಾ ಮತ್ತು ರಾಧಿಕಾ ಅವರ ಸಹೋದರಿ. ಅಖಿಲ್ ಮಾಜಿ ನಿಶ್ಚಿತ ವಧು. ಚಿತ್ರಕಲಾ ಬಿರಾದಾರ್: ಸುಮತಿ ಪಾತ್ರದಲ್ಲಿ. ಪ್ರದೀಪ್, ಸನ್ನಿಧಿ ಮತ್ತು ತನು ಅವರ ತಾಯಿ. ಸಂಪತ್ ಜೆ. ಎಸ್. : ಪ್ರದೀಪ್ ಪಾತ್ರದಲ್ಲಿ, ಸುಮತಿಯ ಮಗ. ಸನ್ನಿಧಿ ಮತ್ತು ತನು ಅವರ ಸಹೋದರ. ವಾಣಿ ಅವರ ಪತಿ. ಸಿತಾರಾ: ವಾಣಿ ಪಾತ್ರದಲ್ಲಿ, ಪ್ರದೀಪ್ ಅವರ ಪತ್ನಿ. ಚಂದ್ರಿಕಾ ಅವರ ಸಹಾಯಕಿ. ಅಮಿತ್ ರಾವ್: ಕಿಶೋರ್ ಪಾತ್ರದಲ್ಲಿ, ಚಂದ್ರಿಕಾಳ ಪ್ರೇಮಿ ನಾಗಾರ್ಜುನ: ಕೌಶಿಕ್ / ತೇಜಸ್ ಆಗಿ. ಕಿಶೋರ್ ಅವರ ಸಹೋದರನಾಗಿ. ಅಂಜಲಿ ಮಾಜಿ ಪ್ರೇಮಿಯಾಗಿ. ಆರ್. ಎನ್. ಸುದರ್ಶನ್: ಸ್ವಾಮಿಜಿಯಾಗಿ. ಸ್ನೇಹಾ ಕಪ್ಪಣ್ಣ: ಕೆಲಸದವಳಾಗಿ === ಅತಿಥಿ ಪಾತ್ರದಲ್ಲಿ === ಕವಿತಾ ಗೌಡ: ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನುವಿನ ಪಾತ್ರದಲ್ಲಿ , ಸಿದ್ಧಾರ್ಥ್ ಇಷ್ಟಪಟ್ಟ ಹುಡುಗಿಯಾಗಿ. ಆದಿತ್ಯ ಸ್ಥಳೀಯ ದರೋಡೆಕೋರನಾಗಿ ಯಾಸಿರ್ ಕಾರ್ತಿಕ್ ಜಯರಾಮ್: ಜೆ. ಕೆ. ಯಾಗಿ. ಸನ್ನಿಧಿಯ ಸಹೋದರನಾಗಿ (ಆರಂಭಿಕ ಪ್ರಸಂಗಗಳು ಮತ್ತು ಸಿದ್ಧಾರ್ಥ್ ಅವರ ನ್ಯಾಯಾಲಯದ ಪ್ರಸಂಗ) ಸ್ಕಂದ ಅಶೋಕ್: ರಾಮಣ್ ಪಾತ್ರದಲ್ಲಿ - ಸಿದ್ಧಾರ್ಥ್ ಸ್ನೇಹಿತ (ಕಿಶೋರ್ ಅಪಹರಣ ಸಂಚಿಕೆಯಲ್ಲಿ) == ಕ್ರಾಸ್ಒವರ್ == ಅಗ್ನಿಸಾಕ್ಷಿ ನಟರು ಹಲವಾರು ಇತರ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಿ ಬಾರಮ್ಮದಲ್ಲಿ ಚಿನ್ನು ಸಿದ್ಧಾರ್ಥನ ಮೊದಲ ಪ್ರೀತಿ ಆಗಿರುತ್ತಾಳೆ. ಅಗ್ನಿಸಾಕ್ಷಿಯ ಮೊದಲ ಕೆಲವು ಕಂತುಗಳಲ್ಲಿ ಚಿನ್ನು ಕಾಣಿಸಿಕೊಳ್ಳುತ್ತಾಳೆ ಮತ್ತು ಲಕ್ಷ್ಮಿ ಬಾರಮ್ಮಾದ ಇಡೀ ಪಾತ್ರವರ್ಗವು ಸನ್ನಿಧಿ ಮತ್ತು ಸಿದ್ಧಾರ್ಥನ ಮದುವೆಗೆ ಹಾಜರಾಗುತ್ತದೆ. ಧಾರಾವಾಹಿಯಲ್ಲಿ ಅಶ್ವಿನಿ ನಕ್ಷತ್ರ ಸನ್ನಿಧಿ, ಜೆ. ಕೆ. ಯ ಸಹೋದರಿಯ ಪಾತ್ರವನ್ನು ನಿರ್ವಹಿಸುತ್ತಾಳೆ. ಅಂತಿಮವಾಗಿ ರಾಧ ರಮಣನ ನಾಯಕ ರಮಣನಿಗೆ ಅಗ್ನಿಸಾಕ್ಷಿಯ ಸಿದ್ಧಾರ್ಥ್ ಸ್ನೇಹಿತನಾಗಿರುತ್ತಾನೆ. ಧಾರಾವಾಹಿಯನ್ನು ಕೊನೆಗೊಂಡ ಸುಮಾರು ಎಂಟು ತಿಂಗಳ ನಂತರ 2020ರ ಅಕ್ಟೋಬರ್ನಲ್ಲಿ ಪಾತ್ರವರ್ಗವು ನನ್ನರಸಿ ರಾಧೆ ಧಾರಾವಾಹಿಯನ್ನು ಕ್ರಾಸ್ಒವರ್ ಎಪಿಸೋಡ್‌ಗಾಗಿ ಸೇರಿತು. == ರೂಪಾಂತರಗಳು == == ಉಲ್ಲೇಖಗಳು ==